Monday, April 25, 2011

ಆನಂದಮಯವಾಗಿರಲಿ...

"ಉತ್ತಮವಾಗಿ ಬದುಕುವುದೂ ಒಂದು ಕಲೆ. ಇದನ್ನು ಅರಿತರೆ ಎಂದಿಗೂ ಸಂತೋಷವಾಗಿರಹುದು. ಪ್ರತಿಯ್ಬೊರು ಸಾಯಲೇ ಬೇಕು. ಸದ್ಯಕ್ಕಂತೂ ಜೀವಿಸುವ ಆನಂದ ಅನುಭವಿಸಿ ಬದುಕಿರುವ ತನಕ ಸಕಾರಾತ್ಮಕವಾಗಿ ಯೋಚಿಸಿ. ಜೀವನ ಸುಂದರವಾಗಿಟ್ಟುಕೊಳ್ಳಿ."

ಜೀವನದಲ್ಲಿ ಜಂಜಾಟಗಳು ಇದ್ದೇ ಇರುತ್ತದೆ. ಇದರಿಂದ ಹೆದರಿದ ಕೆಲವರು ತಮ್ಮನ್ನು ತಾವೇ ಹಳಿದುಕೊಂಡರೆ ಕೆಲವರು ಅದನ್ನು ಧೈರ್ಯದಿಂದ ಎದುರಿಸುತ್ತಾರೆ. ಬದುಕುವ ಈ ಪರಿಯ ಜೀವನದಲ್ಲಿ ಸಂತಸ ತರುತ್ತದೆ.
ಬದುಕ ಬೇಕೆಂದರೆ ಮನದುಂಬಿ ಬದುಕಿ. ಪ್ರತಿ ಕ್ಷದಣದಲ್ಲೂ ಪೂರ್ತಿಯಾಗಿ ಜೀವಿಸಿ ಯಾವ ಗಳಿಗೆಗೆ ಕೊನೆ ಇರುತ್ತದೋ ಯಾರಿಗೆ ಗೊತ್ತು? ಇರುವುದರಲ್ಲೇ ನೆಮ್ಮದಿಯಿಂದ ಜೀವಿಸಿ. ಇದು ಜೀವನವನ್ನು ಸರಿಯಾಗಿ ಅನುಭವಿಸುವ ಸರಿಯಾದ ರೀತಿ. ಪ್ರತಿ ಕ್ಷಣವೂ ಉತ್ಸಾಹ ಮತ್ತು ಸಂತೋಷದಿಂದ ಕೂಡಿರಬೇಕು. ನಾಳೆ ಏನಾಗುತ್ತದೆ ಎನ್ನುವುದು ಗೊತ್ತಿಲ್ಲ. ಹಾಗಿದ್ದರೆ ಈ ದಿನವನ್ನೇಕೆ ಮನಃಪೂರ್ತಿಯಾಗಿ ಜೀವಿಸಬಾರದು? ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲಾಲ ಒಂದು ರೀತಿಯಲ್ಲಿ ಸಮಸ್ಯೆಗಳು ಎದುರಾಗುತ್ತಾ ಇರುತ್ತದೆ. ಜೀವನದಲ್ಲಿರುವ ಸಮಸ್ಯೆಗಳನ್ನು ಕಂಡು ಧೈರ್ಯಗೆಡಹುದು. ಮನದಲ್ಲಿ ಧೈರ್ಯತುಂಬಿರಬೇಕು. ಕಾಲಸರಿದಂತೆ ದುಃಖದ ಕ್ಷಣಗಳನ್ನು ಮರೆತು ಮನಸ್ಸು ಸಂತೋಷದಿಂದಿರುವಂತೆ ನೋಡಬೇಕು.

1. ಸುಂದರ ಕ್ಷಣ ನಿಮ್ಮದಾಗಲಿ
ಜೀವನದಲ್ಲಿ ಜಂಜಾಟಗಳು ಇದ್ದದ್ದೇ. ಪ್ರಕೃತಿಯಲ್ಲಿ ಸಿಗುವ ತುಂತುರು ಮಳೆ ಹನಿ, ಸಮುದ್ರದ ತೀರದ ಕಪ್ಪೆ ಚಿಪ್ಪು, ಮಕ್ಕಳೊಂದಿಗೆ ಕೆಲ ಕ್ಷಣವನ್ನು ಕಳೆಯಿರಿ. ಈ ಜೀವನ ನಿಜವಾಗಿಯೂ ಸುಂದರವಾಗಿದೆ ಎಂ ಅನುಭವ ನಿಮ್ಮದಾಗುತ್ತದೆ.
2.ಸ್ನೀಹಿತರ ಒಡನಾಟ
ಮನುಷ್ಯ ಪ್ರಪಂಚಕ್ಕೆ ಒಂಟಿಯಾಗಿಯೇ ಇರುತ್ತಾನೆ. ಆದರೆ ಆತ ಜೀವಿಸಲು ಅನೇಕ ಸಂಬಂಧಿಕರು ಹಾಗೂ ಸ್ನೇಹಿತರು ಬೇಕಾಗುತ್ತದೆ. ನಿಮ್ಮ ಮನಸ್ಸಿನ ಮಾತು ಹಾಗೂ ನೋವನ್ನು ಹಂಚಿಕೊಳ್ಳುತ್ತಾರೆ. ನಿಮ್ಮ ಮನಸ್ಸಿಗೂ ಆನಂದ ನೀಡುತ್ತಾರೆ.
3. ನಗುತ್ತಿರಿ
ನಗಲು ನೆಪಗಳು ಸಾವಿರಾರು ದೊರಕುತ್ತದೆ. ನಿಮ್ಮ ಅಕ್ಕ ಪಕ್ಕದಲ್ಲಿ ಸಿಗುವ ಹಾಸ್ಯ ಸನ್ನಿವೇಶವನ್ನೂ ಆನಂದಿಸಿ. ಹಾಸ್ಯ, ತಮಾಷೆಯಲ್ಲಿ ಪಾಲ್ಗೋಗಳ್ಳಿ. ನಿಮ್ಮ ನಗು ಜನರನ್ನು ನಿಮ್ಮಹತ್ತಿರ ಆಕರ್ಷಿಸುತ್ತದೆ. ಆಗ ಜೀವನದ ಮಜಾನೆ ಬೇರೆಯಾಗುತ್ತದೆ.
4. ಪಾರ್ಟಿ ಕೊಡಿ ಹಾಗೂ ಹೋಗಿ
ಜೀವನವನ್ನು ಆನಂದಿಸಲು ಒಳ್ಳೆಯ ಮಾರ್ಗ ಚಿಕ್ಕ ಕಾರಣಕ್ಕೂ ಪಾರ್ಟಿಯನ್ನು ಮಾಡಿ ನಾಲ್ಕು ಸ್ನೇಹಿತರೊಂದಿಗೆ ಟ್ರೀಟ್‌ ಕೊಡುವುದು ಮತ್ತು ಪಡೆಯುವುದು. ಗೆಳೆಯರು, ಬಂಧುಗಳು, ಸಂಗಾತಿಗಳ ಜೊತೆ ಕಳೆದ ಕೆಲವು ನಿರಾತಂಕ ಕ್ಷಣಗಳ ನೆನಪು ಇಡೀ ಜೀವನದಲ್ಲಿ ಖುಷಿಯನ್ನು ನೀಡುತ್ತದೆ.
5. ವಿವಾದಗಳಿಂದ ದೂರವಿರಿ
ಕಾರಣವಿಲ್ಲದೆ ವಿವಾದಗಳನ್ನು ಹುಟ್ಟಾಕಬೇಡಿ. ಆದಷ್ಟು ಹೊಂದಿಕೊಂಡು ಹೋಗುವ ಗುಣವನ್ನು ರೂಢಿಸಿಕೊಳ್ಳಿ. ಶಾಂತಿಯಿಂದ ಖುಷಿಯಲ್ಲಿ ಕಾಲಕಳೆದಷ್ಟು ಒಳ್ಳೆಯದು. ಆದರೆ ಇದರರ್ಥ ಅನ್ಯಾಯ ಸಹಿಸಿಕೊಳ್ಳಬೇಕು ಎಂದಲ್ಲ. ವೈ ಮನಸ್ಸಿನಿಂದ ಬೇರೆಯವರಿಗೆ ಕೆಡುಕನ್ನು ಮಾಡಬೇಡಿ.
6. ಸುತ್ತಾಡಲು ಹೋಗಿ
ಸಿಕ್ಕ ಸಮಯದಲ್ಲಿ ಸ್ನೇಹಿತರೊಂದಿಗೆ ಹೊರಗಡೆ ತಿರುಗಲು ಹೋಗಿ. ನಿಮ್ಮ ವಿಹಾರಕ್ಕೆ ಹೋಗುವಾಗ ಕ್ಯಾಮೆರಾ, ತಿಂಡಿಗಳು ಜೊತೆಯಿರಲಿ. ಸ್ನೇಹಿತರೊಂದಿಗೆ ಒಂದಿಷ್ಟು ಆಟಗಳನ್ನಾಡಿ. ಆ ಸುಂದರ ಕ್ಷಣಗಳು ನಿಮ್ಮ ಸವಿನೆನಪಿಗೆ ಕಾರಣವಾಗುತ್ತದೆ.
7. ಮಾತು ಮಿತವಾಗಿರಲಿ
ನೀವು ಆಡುವ ಪ್ರತಿಯೊಂದು ಮಾತು ನಿಮ್ಮ ಗುಣ, ಭಾವನೆಗಳನ್ನು ತಿಳಿಸುತ್ತದೆ. ಇನ್ನೋಬ್ಬರೊಂದಿಗೆ ಮಾತನಾಡುವಾಗ ಆದಷ್ಟು ಸಮಾಧಾನ ಹಾಗೂ ಪ್ರೀತಿಯಿಂದ ಮಾತನಾಡಿ.

ಜನರು ದೈಹಿಕ ನ್ಯೂನ್ಯತೆ ಇದ್ದರೂ ಧೈರ್ಯದಿಂದ ಬದುಕುತ್ತಾರೆ. ಹಾಗಿದ್ದಮೇಲೆ ಏನೂ ನ್ಯೂನ್ಯತೆ ಇಲ್ಲದ ನಾವೇಕೆ ಜೀವನದಲ್ಲಿ ಏನೋ ಕಳೆದುಕೊಂಡಂತೆ ಚಿಂತಿಸಿ ಬದುಕ ಬೇಕು? ಉತ್ತಮವಾಗಿ ಬದುಕುವುದೂ ಒಂದು ಕಲೆ. ಇದನ್ನು ಅರಿತರೆ ಎಂದಿಗೂ ಸಂತೋಷವಾಗಿರಹುದು. ಪ್ರತಿಯ್ಬೊರು ಸಾಯಲೇ ಬೇಕು. ಸದ್ಯಕ್ಕಂತೂ ಜೀವಿಸುವ ಆನಂದ ಅನುಭವಿಸಿ ಬದುಕಿರುವ ತನಕ ಸಕಾರಾತ್ಮಕವಾಗಿ ಯೋಚಿಸಿ. ಜೀವನ ಸುಂದರವಾಗಿಟ್ಟುಕೊಳ್ಳಿ.

Monday, April 11, 2011

ಮರೆವಿಗೆಲ್ಲಿದೆ ಮದ್ದು...


'ನಾನು ಈಗ ಕೈಲಿ ಪುಸ್ತಕವನ್ನು ಹಿಡ್ಕೊಂಡು ಬಂದಿದ್ದೆ, ಫೋನ್‌ಕಾಲ್‌ ಬಂತೂ ಅಂತ ಅದನ್ನಾ ಇಲ್ಲೆ ಎಲ್ಲೋ ಇಟ್ಟು ಹೋದೆ, ಅದೆಲ್ಲಿಟ್ಟೇ ಅನ್ನೋದೆ ಈಗ ನೆನಪಾಗ್ತಾ ಇಲ್ಲ... ಛೇ.. ಎಲ್ಲಿಟ್ಟೆ ನಾನು...?'
ನಿಜ, ಇಂಥ ಅನೇಕ ಮಾತುಗಳನ್ನು ನಾವು ಆಗಾಗ ಕೇಳುತ್ತಲೇ ಇರುತ್ತೇವೆ. ಇದುವೇ ಮರೆವು. ಮರೆವು ಎನ್ನುವುದು ಕೇವಲ ಒಬ್ಬಿಬ್ಬರ ಸಮಸ್ಯೆಯಲ್ಲ. ಮನುಷ್ಯಕುಲಕ್ಕೆ ಅಂಟಿ ಕೊಂಡ ಕಾಯಿಲೆ. ಮರೆವು ಎಂಬುದು ಮಾನವನಿಗೆ ವರವೂ ಹೌದು, ಶಾಪವೂ ಹೌದು. ಇದೆಷ್ಟು ಪ್ರಭಾವಿ ಎಂದರೆ ಅದನ್ನು ಗೆದ್ದವರು ಬಹುಷಃ ಯಾರು ಇಲ್ಲವೇನೋ!
ಇದೇನು ಮಹಾನ್‌ ವಿಷಯವಲ್ಲ ಎಂದು ತಿಳಿಯಬೇಡಿ. ಮರೆವಿನಲ್ಲೂ ಅನೇಕ ವಿಧಗಳಿವೆ. ಕೆಲವು ವಯಸ್ಸಿಗನುಗುಣವಾಗಿ ಬಂದರೆ ಇನ್ನು ಕೆಲವು ದೇಹದಲ್ಲಿರುವ ರಕ್ತ ಪರಿಚಲನೆಗಳಿಂದಲೂ ಬರುತ್ತದೆ. ಇದೊಮ್ಮೆ ವ್ಯಕ್ತಿಯನ್ನು ಆಕ್ರಮಿಸಿತು ಎಂದರೆ ಆತ ಸತ್ತಂತೆ ಬಾಳುವ ಪರಿಸ್ಥಿತಿಯನ್ನೂ ತಂದು ಬಿಡುತ್ತದೆ. ವ್ಯಕ್ತಿ ಚಿಕ್ಕವನಿರುವಾಗ ಆತನಲ್ಲಿ ನೆನಪಿನ ಶಕ್ತಿ ಅಗಾಧವಾಗಿರುತ್ತದೆ. ಹಾಗಾಗಿಯೇ ಚಿಕ್ಕವಯಸ್ಸಿನಲ್ಲಿರುವಾಗ ಮಕ್ಕಳು ಹೆಚ್ಚು ಭಾಷೆಯನ್ನು ಕಲಿಯಲು, ಹೆಚ್ಚೆಚ್ಚು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ. ಹಾಗೇ ವಯಸ್ಸಾದಂತೆ ನೆನಪಿನ ಗೂಡಿನಲ್ಲಿರುವ ಅಲ್ಪ ಸಲ್ಪ ನೆನಪುಗಳು ಹಾರಿ ಹೋಗಿರುತ್ತದೆ. ಆದ್ದರಿಂದಲೇ ಅದನ್ನು ಅರಳು ಮರಳು ಎಂದುಕರೆಯುತ್ತಾರೆ. ಮರೆವು ಎಷ್ಟು ಅವಶ್ಯಕ ಎನಿಸುತ್ತದೆಯೋ ಅಷ್ಟೇ ಅಪಾಯ ಕಾರಿಯೂ ಹೌದು. ಮೆದುಳಿನಲ್ಲಿ ವಿಷಯಗಳ ಸಂಗ್ರಹಣೆಯು ಕೆಲವು ಹಂತಗಳಲ್ಲಿ ಮಾರ್ಪಡುವುದರಿಂದ ಮರೆವಿನಲ್ಲಿ ಜ್ಞಾನೇಂದ್ರಿಯ ಮರೆವು, ದೀರ್ಘಾವಧಿಯ ಮರೆವು, ಅಲ್ಪಾವಧಿಯ ಮರೆವು ಉಂಟಾಗುತ್ತದೆ. ಮೆದುಳಿನಲ್ಲಿ ಬಿಲೆಸೆಲ್‌‌ಸ ಪ್ರಮಾಣಗಳವ್ಯತ್ಯಾಸ ಹಾಗೂ ಸೆಲ್ಸ್ ನ ಉತ್ಪತ್ತಿ ಕಡಿಮೆಯಾಗುವುದರಿಂದ ಮರೆವು ಉಂಟಾಗುತ್ತದೆ. ನಾವಿರುವ ಸನ್ನಿವೇಶದಲ್ಲಿ ವಿಷಯಗಳ ಕುರಿತು ಗಮನ ಹರಿಸದೆ ಬೇರೊಂದು ವಿಚಾರದಲ್ಲಿ ಮಗ್ನರಾಗಿದ್ದರೂ ವಿಸ್ಮರಣೆ ಉಂಟಾಗುತ್ತದೆ. ಇದುಮುಖ್ಯವಾಗಿ ವ್ಯಕ್ತಿಯ ವ್ಯಕ್ತಿತ್ವವನ್ನು ಅವಲಂಬಿಸಿರುತ್ತದೆ. ಎನ್ನುತ್ತಾರೆ ಉತ್ತರ ಕನ್ನಡ ಜಿಲ್ಲೆಯ ಎ.ವಿ.ಬಾಳಿಗಾ ಕಾಲೇಜಿನ ಮನೋವಿಜ್ಞಾನದ ಉಪನ್ಯಾಸಕ ವೆಂಕಟಾಚಲ.
ಮೆದುಳಿನಲ್ಲಾಗುವ ಬದಲಾವಣೆ ಪ್ರತಿಯೊಬ್ಬರೂ ಹುಟ್ಟಿದ ಅವಧಿಯಿಂದ 20 ವರ್ಷ
ಕಳೆದಂತೆ ಮೆದುಳಿನಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತದೆ. ಇಂಥ ಸಮಯದಲ್ಲಿ ಕೆಲವು ಮೆದುಳಿನ ಕೋಶಗಳು ತಮ್ಮ ಶಕ್ತಿಯನ್ನು ಅಲ್ಪ ಪ್ರಮಾಣದಲ್ಲಿ ಕಳೆದುಕೊಳ್ಳುತ್ತ ಬರುವುದರಿಂದ ಮರೆವು ಉಂಟಾಗುತ್ತದೆ. ಕೆಲವೊಮ್ಮೆ ನಾವು ನೋಡುವ ಹಾಗೂ ಕೇಳುವ ವಿಷಯಗಳಲ್ಲಿ ಗಮನ ನೀಡದಿದ್ದರೂ ಸಹ ಮರೆವು ಉಂಟಾಗುತ್ತದೆ.

ವಿಸ್ಮರಣೆಗೆ ಕಾರಣ:
1. ಸಂಗತಿಗಳ ಬಗ್ಗೆ ಲಕ್ಷ್ಯ ವಹಿಸದಿರುವುದು.
2. ಅಮ್ನೇಷಿಯಾ ಉಂಟಾಗುವುದರಿಂದ.
3. ಕೆಲವೂಮ್ಮೆ ಆತ್ಮೀಯರನ್ನು ಕಳೆದು ಕೊಂಡು ಉಂಟಾಗುವ ಮಾನಸಿಕ ಆಘಾತ.
4. ವಯಸ್ಸಾದಂತೆ ಮೆದುಳಿನಲ್ಲಿ ವಿಷಯಗಳನ್ನು ಸಂಗ್ರಹಿಸಿಕೊಳ್ಳುವಾಗ ಬರುವ ಮಾನಸಿಕ ಘರ್ಷಣೆ.
5. ವ್ಯಕ್ತಿಯ ಮಾನಸಿಕ ಸ್ಥಿತಿಯ ಸಾಮರ್ಥ್ಯ.
6. ರಕ್ತದೊತ್ತಡ ಹೆಚ್ಚಾಗಿರುವುದು.
7. ಅತಿಯಾದ ಮಾತ್ರೆಗಳ ಸೇವಿಸುವುದು.
8. ಮೆದುಳಿನ ನರಗಳ ದೌರ್ಭಲ್ಯ.
9. ರಕ್ತ ಸಂಚಲನೆ ನಿಧಾನವಾಗುವುದು.
10. ಮೆದುಳಿಗೆ ಪರಿಣಾಮ ಕಾರಿ ಅಪಘಾತ
ಉಂಟಾಗುವುದರಿಂದ.

ವಿಸ್ಮರಣೆಗೆ ಚಿಕಿತ್ಸೆ:
1. ಗಿಡಮೂಲಿಕೆ ಔಷಧಗಳನ್ನು ಬಳಸುವುದು.
2. ಧ್ಯಾನ ಮಾಡುವುದು.
3. ಪೌಷ್ಠಿಕ ಆಹಾರಗಳನ್ನು ಸೇವಿಸುವುದರಿಂದ.
4. ಹಸಿರು ತರಕಾರಿ, ಒಂದೆಲಗ, ತುಳಸಿ ಎಲೆ, ಮೀನು
ಹಾಗೂ ಗರಿಕೆ ಹುಲ್ಲಿನ ರಸದ ಕಶಾಯ ಸೇವಿಸಬೇಕು.
5. ಧ್ಯಾನ, ಯೋಗ, ಹಾಗೂ ಪ್ರಾಣಯಾಮ
ಮಾಡುವುದರಿಂದ ನೆನಪಿನ ಶಕ್ತಿಯನ್ನು ಹೆಚ್ಚಿಸಕೊಳ್ಳಬಹುದು.
6. ಮೆದುಳಿಗೆ ಕೆಲಸ ಕೊಡುವುದು, ಸುಡೋಕು,
ಪದಬಂಧ, ಚಿಕ್ಕಪುಟ್ಟ ಲೆಕ್ಕಗಳನ್ನೆಲ್ಲ ಮಾಡುವುದರಿಂದ ಮೆದುಳಿಗೆ ವ್ಯಾಯಾಮ ಕೊಟ್ಟಂತಾಗುತ್ತದೆ. ಮರೆವು ಉಂಟಾಗುತ್ತದೆ.

ಹೇಗೆ ನೆನಪಿಟ್ಟುಕೊಳ್ಳುವುದು?
1. ಬೇಕಾದ ವಿಷಯಗಳನ್ನು ಚೀಟಿಯಲ್ಲಿ ಬರೆದಿಟ್ಟು ಕೊಳ್ಳಿ.
2. ಕೇಳಿದ ಹೊಸ ವಿಚಾರಗಳನ್ನು ನಿಮ್ಮ ಹಳೆ ವಿಚಾರಗಳಿಗೆ ಅಥವಾ ಗೊತ್ತಿದ್ದ
ಪದಗಳಿಗೆ ಹೋಲಿಸಿ ಮನದಟ್ಟು ಮಾಡಿಕೊಳ್ಳಿ.
3. ನಿಮ್ಮ ಮುಖ್ಯ ಕೆಲಸಗಳ ಮಾಹಿತಿಗಳನ್ನು ನಿಮ್ಮ ದಿನಚರಿ ಪಟ್ಟಿಯಲ್ಲಿ
ಬರೆದಿಟ್ಟುಕೊಳ್ಳಿ.
4. ಹೊಸ ಹೊಸ ವಿಚಾರಗಳನ್ನು ಕೇಳಿದಂತೆ ಪುನಃ ಪುನಃ ಮನದಲ್ಲಿ
ನೆನಪಿಸಿಕೊಳ್ಳಿ.
5. ನಿಮ್ಮ ಕೆಲವು ದಾಖಲಾತಿ ಪುರವಣಿಗೆ ಅಥವಾ ಇನ್ಯಾವುದೋ ವಸ್ತುಗಳನ್ನು
ಇಡಲು ಅದರದೇ ಆದ ಜಾಗವನ್ನು ಮಾಡಿ ಪ್ರತಿ ಬಾರಿ ಅಲ್ಲೇ ಇಡಿ.
6. ಆಗಾಗ ಮನಸ್ಸನ್ನು ವಿಶ್ರಾಂತ ಗೊಳಿಸಲು ದಿನದಲ್ಲಿ ಒಂದು ಗಂಟೆ ಧ್ಯಾನ
ಮಾಡಿ.
7. ನಿಮ್ಮನ್ನು ನೀವು ದೈಹಿಕವಾಗಿ ಹಾಗೂ ಮಾನಸಿಕವಾಗಿ
ಕ್ರಿಯಾಶೀಲರನ್ನಾಗಿಸಿಕೊಳ್ಳಿ.
8. ಯಾವುದೇ ವಿಚಾರವನ್ನು ಕೇಳುವಾಗ ಗಮನವಿಟ್ಟು ಆಲಿಸಿ.
9. ಯಾವೊಂದು ವಿಚಾರದ ಬಗ್ಗೆಯೇ ಅತಿಯಾಗಿ ಯೋಚಿಸಬೇಡಿ.
10. ನಿಮ್ಮ ಮನಸ್ಸನ್ನು ಆದಷ್ಟು ತಿಳಿಯಾಗಿಡಲು ಪ್ರಯತ್ನಿಸಿ.

ದೈಹಿಕ ಆರೋಗ್ಯ ಹಾಳಾದರೆ ಯಾವುದಾದರೂ ಚಿಕಿತ್ಸೆ, ಔಷಧಿಗಳನ್ನು ಸೇವಿಸಿ
ಆರೋಗ್ಯವಂತರಾಗಬಹುದು. ಆದರೆ ಅದೇ ಮಾನಸಿಕ ಆರೋಗ್ಯ ಹಾಳಾದರೆ ಗುಣ
ಪಡಿಸುವುದು ಕಷ್ಟ ಸಾಧ್ಯ. ಅದರಲ್ಲೂ ಮದ್ದೇ ಇಲ್ಲದ ಮರೆವಿನಂತ ಕಾಯಿಲೆಗಳು
ಬಂದರೆ ಬಹಳ ಕಷ್ಟ.. ವ್ಯಕ್ತಿಯ ವ್ಯಕ್ತಿತ್ವ ಉತ್ತವಾಗಿದ್ದರೆ ಆತ ಕೆಲವೊಂದು
ಆಯಾಮಗಳಿಂದ ಮರೆವಿಗೆ ಕೊಂಚ ಪರಿಹಾರ ಕಂಡು ಕೊಳ್ಳಬಹುದು ಎನ್ನುತ್ತಾರೆ ವೆಂಕಟಾಚಲ
ಹೌದು... ಇಷ್ಟೊಂದು ವಿಷಯ ಓದಿದ ಮೇಲೆ ಮರೆವಿನ ಬಗ್ಗೆ ಮರ್ಯೋದಿಲ್ಲ ತಾನೇ..?

Friday, April 1, 2011

ನೆನಪಿನಾಳದಲಿ ಯುಗಾದಿ

'ಯುಗಾದಿ ಹೊಸತನದ ಸಂಕೇತ... ಸಕಲರಿಗೂ ತರಲಿ ಶುಭ... ಮೂಡಲಿ ಜೀವನದಲಿ ಹೊಸಬೆಳಕು... ಸಂವತ್ಸರಗಳಂತೆ ಬದಲಾಗಲಿ ಮನವು... ಬೆಳೆಯಲಿ ಹೃದಯ ಹೃದಯಗಳ ನಡುವಿನ ಪ್ರೀತಿಯ ಸಂಬಂಧ... ಸರ್ವರಿಗೂ ಖರ ಸಂವತ್ಸರದ ಶುಭಾಶಯಗಳು.’ ಅಂದು ಎಲ್ಲಿಲ್ಲದ ಆನಂದ. ಹೊಸ ಜೀವನದ ಹೊಸ್ತಿಲಲಿ ನಿಂತಿರುವ ನನಗೆ ಯುಗಾದಿಯ ಸ್ವಾಗತ ... ನಾನೇನೋ ಮನೆಗೆ ಬಂದ ಲಕ್ಷ್ಮಿ ಎಂಬಂತೆ ಮಾವನ ಉಪಚಾರ... ಬಾಗಿಲಿಗೆ ರಂಗೋಲಿಯಿಟ್ಟು ದೇವರ ಪೂಜೆಗೆ ಅಣಿಮಾಡಲು ಅತ್ತೆಯ ಸಹಕಾರ... ನಿಜಕ್ಕೂ ಬಾಳ ಹಾದಿಯ ಸುಖ-ದುಃಖದ ಪಯಣಕ್ಕೆ ಆ ಯುಗಾದಿ ದಾರಿ ದೀಪವಾಯಿತು... ಕನಸು ಮತ್ತು ವಾಸ್ತವಗಳ ಸಂಗಮವಾದ ಯುಗದ ಆದಿ ‘ಯುಗಾದಿ’ ನೂರಾರು ಕನಸುಗಳನ್ನು ಹೊತ್ತು ತಂದಿತ್ತು. ವಾಸ್ತವಗಳಿಗೆ ಮುಖಾ ಮುಖಿಯಾಗಿ ಸೆಣಸುವ, ಬದುಕಿನ ಅರ್ಥವನ್ನು ಹುಡುಕುವ, ಬದುಕಿನ ಮುಂದಿರುವ ದಟ್ಟ ಅರುಣೋದಯದ ಬೆಳಕಿನಲಿ ಕರಗಿ ಹೋಗುವಂತೆ ಕಷ್ಟಗಳು ಕರಗಿ ಹೋಗಿತ್ತು. ಹೊಸದಾಗಿ ಬಿಗಿದುಕೊಂಡ ಸಂಬಂಧಗಳಿಗೆ ಸುಂದರವಾದ ಅರ್ಥವನ್ನು ಯುಗಾದಿ ತಂದಿತ್ತು. ತುಂಟಾಟದ ನೆನಪುಗಳೊಂದಿಗೆ ಜವಾಬ್ದಾಯ ಜೀವನದತ್ತ ಅಡಿ ಇಡುವ ಶುಭ ಘಳಿಗೆ ಅದಾಗಿತ್ತು. ಪ್ರಕೃತಿಯಲ್ಲಿ ಗಿಡ-ಮರಗಳು ಹೊಸ ಚಿಗುರುಗಳಿಂದ ಆವೃತಗೊಂಡಂತೆ, ಕೈ ತುಂಬ ಬಳೆಗಳು, ಕಿವಿಯಲ್ಲಿ ಮಿನುಗುವ ಓಲೆ, ಹಣೆಯಲ್ಲಿ ನಗುತ್ತಿದ್ದ ಕುಂಕುಮ, ಕೆನ್ನೆಗೆ ಹಚ್ಚಿದ ಅರಿಶಿಣವು ನನ್ನ ಬಾಳಿನ ಬಾಗಿಲಿಗೆ ಹೊಸ ಭಾಗ್ಯ ತಂದಿತ್ತು. ಪ್ರಕೃತಿಯಲ್ಲಿ ಉಂಟಾಗುವ ಬದಲಾವಣೆಯಂತೆ ಪ್ರಕೃತಿಗೆ ಅನ್ವರ್ಥ ಎನ್ನಿಸುವ ಹೆಣ್ಣಿನ ಜೀವನದಲ್ಲೂ ಬದಲಾವಣೆಗಳು ವೌನವಾಗಿಯೇ ಬರುತ್ತದೆ. ಅದಕ್ಕೆ ಸಹನೆಯಿಂದ ಸಹಕರಿಸಿದಾಗಲೇ ಬದುಕಿನ ಸಿಹಿ-ಕಹಿಗಳನ್ನು ನೀಗಿಸಲು ಸಾಧ್ಯ ಎಂಬ ಅಮ್ಮನ ಮಡಿಲ ಮಾತು ಮನದಲ್ಲಿ ಮನೆಮಾಡಿತ್ತು. ಆಗ ಉದಯಿಸಿದ ಕಲ್ಪನೆಯ ಗಿಡಕ್ಕೆ ಆ ಯುಗಾದಿಯಲ್ಲಿ ನೀರೆರೆದಿದ್ದೆ. ಅದೀಗ ಬೆಳೆದು ತಂಪಾದ ಗಾಳಿ ಬೀಸುತ್ತಿದೆ ಎಂದು ಆನಂದಿಸುತ್ತಿರುವಾಗಲೇ ಮತ್ತೆ ಯುಗಾದಿ ಬಂದಿದೆ. ಎಲ್ಲೆಲ್ಲೂ ಸಡಗರದ ಇಂಪು ಮೊಳಗಿದೆ. ನಿಜ, ಯುಗಾದಿಯೇ ಹಾಗೆ. ಕೇವಲ ವರುಷದ ನೆನಪುಗಳನ್ನು ಮೆಲಕು ಹಾಕುವ ಜೊತೆಗೆ ಏನಾದರೂ ಬದುಕಲ್ಲಿ ಸಾಧಿಸಬೇಕೆನ್ನುವ ಸಂಕಲ್ಪ ತೋಡುವಂತೆ ಮಾಡುತ್ತದೆ. ಸುಖ-ದುಃಖಗಳ ಸಾಂಕೇತಿಕ ಕಲ್ಪನೆಯೇ ಯುಗಾದಿ. ಈ ಯುಗಾದಿ ಕೇವಲ ಒಂದು ದಿನದ ಜಾತ್ರೆಯಾಗಬಾರದು, ಬದಲಿಗೆ ದಿನಂಪ್ರತಿಯ ಜಾತ್ರೆಯಾಗಬೇಕು...